‘ಕಾಂತಾರ’ 300 ಕೋಟಿ ಕ್ಲಬ್ ಸೇರಿ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿದೆ. ಯಶಸ್ಸಿನ ಓಟ ಮುಂಬರುವ ದಿನಗಳಲ್ಲಿ ಇನ್ನೂ ಜೋರಾಗಲಿದೆ. ಸೃಷ್ಟಿಯಾಗಿರೋ ಹಲವು ದಾಖಲೆಗಳನ್ನು ಮುರಿದು ತನ್ನದೇ ಆದ ಹೊಸ ದಾಖಲೆಗಳನ್ನು ಸೃಷ್ಟಿಸಿ ಇವುಗಳನ್ನು ಹಿಂದಿಕ್ಕುವುದು ಸ್ವಲ್ಪ ಕಷ್ಟವೇ ಏನೋ ಎನ್ನುವಷ್ಟರ ಮಟ್ಟಿಗೆ ಜನಮಾನಸದಲ್ಲಿ ಈ ಸಿನಿಮಾ ಖಾಯಂ ಸ್ಥಾನ ಪಡೆದುಕೊಂಡಿದೆ. ಎರಡು ಬಾರಿ ನೋಡಿದವರ ಸಂಖ್ಯೆಯೂ ಹೆಚ್ಚಿದೆ!. ಕರಾವಳಿಯ ಪ್ರತಿಭೆ ರಿಷಬ್ ಶೆಟ್ಟರ ಸಿನಿಮಾ ಕೇವಲ ದಾಖಲೆ ಮಾತ್ರ ಸೃಷ್ಟಿಸದೆ ಪ್ರೇಕ್ಷಕರಿಗೆ, ಸಿನಿಮಾ ತಯಾರಕರಿಗೆ ಹಲವು ಪಾಠಗಳನ್ನು ಕಲಿಸಿತು.
* Content ಮುಖ್ಯ. ಈ ಹಿಂದೆ ‘ ಒಂದು ಮೊಟ್ಟೆಯ ಕಥೆ’ ಕೂಡ ಇದೇ ಪಾಠವನ್ನು ಹೇಳಿಕೊಟ್ಟಿತ್ತು.
* More Regional is More Universal. ದೇಸೀ ಗಂಧ, ಊರು, ಕೇರಿ,ಸಂಸ್ಕೃತಿ, ಆಚಾರ,ವಿಚಾರ, ಭಕ್ತಿ ಜನರಿಗೆ ಆಪ್ತ. ಇದನ್ನೇ ಕೇಂದ್ರೀಕತವಾಗಿಟ್ಟುಕೊಂಡು ನೇರ ಪ್ರೇಕ್ಷಕರ ಹೃದಯಕ್ಕೆ ಆಕ್ರಮಣ ಮಾಡುವುದು.
* ಸಾಮಾಜಿಕ ಮಾಧ್ಯಮ – ಪ್ರಚಾರದ ಬಹು ದೊಡ್ಡ ಆಯಾಮ. Social Mediaದಿಂದ ಬಹು ದೊಡ್ಡ ಗೆಲುವು ಸಾಧ್ಯವಿದೆ!
* ಕರಾವಳಿಯ ಪ್ರಮುಖ ಆರಾಧನೆಗಳಲ್ಲೊಂದಾದ ದೈವದ ಆರಾಧನೆಯ ಮಹತ್ವ ಕರಾವಳಿಗರಿಗೇ ಮನದಟ್ಟಾಗುವಂತೆ ಮಾಡಿ ವಿಶ್ವದ ಯಾವುದೇ ಮೂಲೆಯಲ್ಲಿ ನೀವಿದ್ದರೂ ನಿಮ್ಮ ಮೂಲ, ಬೇರುಗಳೊಂದಿಗೆ ಸಂಪರ್ಕದಲ್ಲಿರಿ ಎನ್ನುವಂತೆ ಪರೋಕ್ಷವಾಗಿ ಸಾರಿ ಹೇಳಿತು.
* ಯಾವುದೇ ಭಾಷೆಯ cinemaವಿರಲಿ ಅದನ್ನು ಗಡಿ ಮೀರಿ ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ಸಾಬೀತುಪಡಿಸಿತು.
* Pan India ಮಾಡುವುದಲ್ಲ Pan India ಆಗುವುದು ಹೇಗೆ? ಎಂದು ತೋರಿಸಿಕೊಟ್ಟಿತು. !
ಇವತ್ತು ಗುರುವಾರ. ಶಿರಡಿಯ ಸದ್ಗುರು ಸಾಯಿಬಾಬಾ ಅವರ ಪರಮ ಭಕ್ತರು, ಆರಾಧಕರಾದ ಸ್ನೇಹಿತರೊಬ್ಬರು ನನಗೆ ಕರೆ ಮಾಡಿ ‘ವರಾಹ ರೂಪಂ‘ ಹಾಡಿನ Copyright ಕುರಿತು ಮೊದಲು ವಿಚಾರಿಸಿದರು. ನನಗೆ ತಿಳಿದಷ್ಟರ ಮಟ್ಟಿಗೆ ವಿವರಿಸಿದೆ. ನಂತ್ರ ಆಶ್ಚರ್ಯವೆನಿಸುವ ವಿಷಯವೊಂದನ್ನು ಪ್ರಸ್ತಾಪಿಸಿದರು. ‘ನಿಮ್ಮಲ್ಲಿ ಒಂದು ವಿಷಯ ಹೇಳಬೇಕು. ಇದು ನನಗೆ ಬಹಳ ದಿನದಿಂದ ಕಾಡುತ್ತಿತ್ತು. ಆದರೆ ಇವತ್ತು ನಿಘಂಟಾಗಿದೆ. ಕಾಂತಾರ ಚಿತ್ರೀಕರಣವಾದ ಸ್ಥಳದಲ್ಲಿ ಏನೋ ದೈವೀ ಶಕ್ತಿಯೊಂದು ಬಹಳ ಹಿಂದಿನಿಂದಿದೆ. ಇಲ್ಲದೆ ಇದ್ದರೆ ಸಿನೆಮಾವೊಂದು ಈ ಪರಿ ಎಲ್ಲಾ ಆಯಾಮದಲ್ಲೂ ಅಭೂತಪೂರ್ವ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಅಂತರ್ಜಾಲ ಮುನ್ನೆಲೆಗೆ ಬಂದ ಮೇಲೆ ಹಲವು ಚಿತ್ರಗಳು ಬೇರೆ ಬೇರೆ ಸ್ಥರಗಳಲ್ಲಿ ಗೆದ್ದಿದೆ. ಆದ್ರೆ ಈ ಕಾಂತಾರ ಇಡೀ ವಿಶ್ವವನ್ನೇ ಆವರಿಸಿಕೊಂಡಿದೆ ಎಂದರೆ ಆ ಶಕ್ತಿ ಎಷ್ಟೊಂದು ದೈವೀಕವಾದದ್ದು ಎಂದು ಊಹಿಸಿ. ಚಿತ್ರೀಕರಣಗೊಂಡ ಜಾಗದಲ್ಲಿ ಅಥವಾ ಆಸುಪಾಸಿನಲ್ಲಿ ದೈವ, ನಾಗ ಸಾನಿಧ್ಯ ಎರಡೂ ಇದೆ. ನಾನು ಕಲಿತ ‘ವಿದ್ಯೆ’ಯ ಆಧಾರದಲ್ಲಿ ಹೇಳುವುದಾದರೆ ಇನ್ನು 6 ತಿಂಗಳ ಒಳಗಾಗಿ ಚಿತ್ರೀಕರಣಗೊಂಡ ಸ್ಥಳದಲ್ಲಿ ಒಂದು ಕ್ಷೇತ್ರ ನಿರ್ಮಾಣವಾಗುತ್ತದೆ. ಅಲ್ಲಿ ಹಲವಾರು ಮಂದಿ ಬರುತ್ತಾರೆ, ಇದು ಸತ್ಯ‘ ಎಂದು ಖಡಾಖಂಡಿತವಾಗಿ ಹೇಳಿದರು. ಒಂದು ಕ್ಷಣಕ್ಕೆ ಆಶ್ಚರ್ಯಚಕಿತನಾದೆ! ಹೀಗೆ ಹೇಳಿದವರು ಯಾರೆಂದು ನಾನೀಗ ಗುರುತು ಬಹಿರಂಗ ಪಡಿಸುವುದಿಲ್ಲ. ಅವರ ಮಾತು ನಿಜವಾಗಬಹುದೇ?ಇಂದಿನಿಂದ 6 ತಿಂಗಳು ಕಾಯುತ್ತೇನೆ. ಆಗ ಮತ್ತೊಂದು ಲೇಖನ ಬರೆದು ಅವರನ್ನು ಪರಿಚಯಿಸುತ್ತೇನೆ.
Pics of Keradi village near Kundapura
ಸಿನಿಮಾ ಎನ್ನುವ ಕಲಾ ಪ್ರಕಾರ ಹೇಗೆಲ್ಲ ಜನರನ್ನು ಆವರಿಸಿಕೊಂಡು, ಮೋಡಿ ಮಾಡುತ್ತದೆ ಎಂದು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ..
ಸಿನಿಮಾ, ಕಾಂತಾರ, ಕಾಡು, ದೈವ ಎಂದು ಹೇಳಲು ಹೋದರೆ ಸಾವಿರ ಮಾತಿದೆ..
ಚಿತ್ರ ಬಿಡುಗಡೆಯಾದಂದಿನಿಮದ ಇಂದಿನವರೆಗೂ ಒಂದಲ್ಲ ಒಂದು ಆಶ್ಚರ್ಯಕರ ಸಂಗತಿಗಳ ಪರಿಚಯ ಆಗ್ತಾನೇ ಇದೆ. ಈ ವಿಚಾರಕೂಡ ಅದೇ ರೀತಿಯ ವಿಶೇಷ ಕಾಯುವಿಕೆಯ ಸರದಿ ನಮ್ಮೆಲ್ಲರ ಮುಂದಿಟ್ಟಿದ್ದಾರೆ ಅವಿನಾಶ್ ….. ಇನ್ನಾರು ತಿಂಗಳ ನಂತರದ ವಿಶೇಷಗಳಿಗೆ ಕಾದು ನೋಡಿ !!!
Yes, will wait for 6 months miracle to happen.