3 ದಿನಗಳ ಹಿಂದೆ ಹೆಸರಾಂತ ದೈವನರ್ತಕರಾದ ಶ್ರೀ ಕುಮಾರ ಪಂಬದ ಅವರು ಕಾಂತಾರ ಸಿನಿಮಾದ ಕುರಿತು ಹೇಳಿದ ಕೆಲವು ಕುತೂಹಲವೆನಿಸುವ ಸಂಗತಿಗಳನ್ನು ದಾಖಲಿಸಿದ್ದನ್ನು ನೀವು ಗಮನಿಸಿರಬಹುದು. ಇದರ ಬೆನ್ನಿಗೆ ಉಡುಪಿಯ ಜಿ. ಎಸ್. ಬಿ. ಸಮಾಜದ ಪ್ರಸಿದ್ಧ ವೈದಿಕರಾದ ವೇದಮೂರ್ತಿ ಶ್ರೀ ಚೇಂಪಿ ರಾಮಚಂದ್ರ ಭಟ್ (Chempi Ramachandra Bhat) ಅವರು ಸಿನೆಮಾವನ್ನು ಕುಟುಂಬ ಸಮೇತ ವೀಕ್ಷಿಸಿ ಚಿತ್ರೀಕರಣಗೊಂಡ ಸ್ಥಳದಿಂದಲೇ ವಿಡಿಯೋ ಮೂಲಕ ಸಿನೆಮಾವನ್ನು ಯುವ ಜನಾಂಗ ಮತ್ತು ಸಮಾಜಕ್ಕೆ ಆದರ್ಶ ವ್ಯಕ್ತಿತ್ವವನ್ನು ರೂಪಿಸಲು ಅರ್ಥೈಸುವಂತೆ ಹಾಡಿ ಹೊಗಳಿದ್ದಾರೆ. ಶ್ರೀ ರಾಮಚಂದ್ರ ಭಟ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಇವರು ಗಿಂಡಿ ನೃತ್ಯ ಕಲಾವಿದರೂ ಆಗಿದ್ದಾರೆ. ಅವರು ಮತ್ತವರ ವೈದಿಕ ವೃಂದ ನೆರವೇರಿಸುವ ಪೂಜೆ ಪುನಸ್ಕಾರಗಳು ವಿಶೇಷ ಮಹತ್ವ ಪಡೆದಿದೆ. ವಿಡಿಯೋ ಇಲ್ಲಿದೆ.
Disclaimer: The views and opinions expressed in this article & video are those of the guest and do not necessarily reflect the views or positions of this website (avinashkamath.in)