ಉಡುಪಿಯನ್ನು ಕಟ್ಟಿ ಬೆಳೆಸಿದ ಮಹನೀಯರು ಹಲವರು. ಆದ್ರೆ ಮುಂಚೂಣಿಯಲ್ಲಿ ಕಾಣುವವರು ಹಾಜಿ ಅಬ್ದುಲ್ಲಾ ಸಾಹೇಬರು. ಅವರು ಹುಟ್ಟಿದ ದಿನಾಂಕ ನಮಗೆ ತಿಳಿದಿಲ್ಲ. Aug 12, 1935 ರಂದು ಇಹಲೋಕ ತ್ಯಜಿಸಿದರು. ಇಂದಿಗೆ ಅವರು ನಮ್ಮನ್ನಗಲಿ ಸರಿಯಾಗಿ 88 ವರ್ಷ.
ಅವರ ನೆನಪಿಗಾಗಿ ಈ ದಿನ ನನ್ನ ಬಾಲ್ಯ ಸ್ನೇಹಿತ ಮೊಹಮ್ಮದ್ ಆರೀಫ್ ನ ತಮ್ಮ ಮೊಹಮ್ಮದ್ ಆದಿಲ್ ಇತ್ತೀಚಿಗೆ ಮಣಿಪಾಲದಲ್ಲಿ ಮನೆ ನಿರ್ಮಿಸಲು ಖರೀಸಿದ ಜಾಗದಲ್ಲಿ 3 ( ಹಲಸು, ಬಿಳಿ ಜಾಮ್ , ತೆಂಗು )ಗಿಡಗಳನ್ನು ನೆಟ್ಟೆವು.
ವಿಶೇಷ ಅಂದ್ರೆ ಅವರಿಬ್ಬರ ಮಕ್ಕಳಿಂದ ನಾವು ಈ ಈ ಕಾರ್ಯ ಮಾಡಿಸಿದೆವು. ಮಕ್ಕಳಿಂದ ಗಿಡಗಳನ್ನು ನೆಟ್ಟು ಬೆಳೆಸುವುದು ನಮ್ಮ ‘ ನಮ್ಮ ಮನೆ ನಮ್ಮ ಮರ’ ಅಭಿಯಾನದ ಮೂಲ ಉದ್ದೇಶಗಳಲ್ಲೊಂದಾಗಿದೆ.
![](https://avinashkamath.in/wp-content/uploads/2023/08/WhatsApp-Image-2023-08-12-at-8.00.22-PM.jpeg)
ಆರೀಫ್ ನ ಅಪ್ಪ ಕೃಷಿ ಪ್ರೇಮಿ. ಇವರಿಬ್ಬರೂ ಉದ್ಯೋಗ ನಿಮಿತ್ತ Gulf ಗೆ ಹೋದ ನಂತರ ಅವರೇ ಇವುಗಳಿಗೆ ನೀರೆರೆದು ಪೋಷಿಸುತ್ತಾರೆ.
* ವಿಶ್ವವಿಖ್ಯಾತ ಕಾರ್ಪೋರೇಶನ್ ಬ್ಯಾಂಕ್ ಸಂಸ್ಥಾಪಕರು ಅವರು.
* ಹಾಜಿ ಅಬ್ದುಲ್ಲಾ ಸಾಹೇಬರು ಸೌಹಾರ್ದದ ಕೊಂಡಿಯಾಗಿ ಬದುಕಿದ್ದರು.
* ಅವರಿಗೂ ಉಡುಪಿ ಶ್ರೀ ಕೃಷ್ಣ ಮಠಕ್ಕೂ ಅವಿನಾಭಾವ ಸಂಬಂಧ ಇತ್ತು.
* ಅವರ ಮನೆ ಮುಂದೆ ಜನರು ನಡೆದುಕೊಂಡು ಹೋಗುವಾಗ ಚಪ್ಪಲಿಯನ್ನು ತೆಗೆದು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದರಂತೆ. ಅವರಂದ್ರೆ ಊರವರಿಗೆ ಅಷ್ಟೊಂದು ಗೌರವ ಇತ್ತು.
* ದಾನ ಎನ್ನುವ ಪದ ಅವರಿಂದಲೇ ಹುಟ್ಟಿರಬಹುದು ಎಂದು ಹಿರಿಯರೊಬ್ಬರು ನನ್ನಲ್ಲಿ ಹೇಳಿದ ನೆನಪಿದೆ.
ಹೀಗೆ ಅವರ ಕುರಿತು ಬರೆಯುತ್ತಲೇ ಹೋದರೆ ಸಾವಿರ ಸಾವಿರ ಮಾತಿದೆ..
ಈ ಮಕ್ಕಳು, ಆ ಗಿಡಗಳನ್ನು ನೋಡಿ ಹಾಜಿ ಸಾಹೇಬರು ಮುಗುಳ್ನಗೆ ಬೀರಿ ನಮ್ಮನ್ನು ಆಶೀರ್ವದಿಸುತ್ತಾರೆ ಎಂದು ನಂಬುತ್ತೇನೆ.
ಅಂದ ಹಾಗೆ ನನ್ನ ಬ್ಲಾಗ್ ಆರಂಭವಾಗಿ ಇಂದಿಗೆ ಒಂದು ವರ್ಷ !
ಮುಂದಿನ ದಿನಗಳಲ್ಲಿ ನಿಮ್ಮಲ್ಲಿ ಹಂಚಿಕೊಳ್ಳಲು ನನ್ನಲ್ಲಿ ನೂರು ವಿಷಯಗಳಿವೆ, ಸಾವಿರ ಮಾತಿದೆ.
Superb brother , Thank you very much 😍