Vishwanatha Bhaskara Ganiga. ಈ ಹೆಸರನ್ನು ನೀವು ಕೇಳಿದ ಹಾಗಿದೆ, ಅಲ್ವಾ? Corona ಗು ಮುನ್ನ ಅಂದ್ರೆ 2019 ರಲ್ಲಿ Common Wealth PowerLiftingನಲ್ಲಿ 93 ಕೆಜಿ DeadLift ವಿಭಾಗದಲ್ಲಿ 327.5 KG ಭಾರ ಎತ್ತಿ 8 ವರ್ಷಗಳ ಹಳೆಯ England ರಾಷ್ಟ್ರದ Stephen Immanuel ಅವರ 315 KG ದಾಖಲೆಯನ್ನು ಮುರಿದು ಮತ್ತೊಂದು ದಾಖಲೆ ನಿರ್ಮಿಸಿ ಭಾರತದ ಹೆಮ್ಮೆಯಾಗಿ ಹೊರಹೊಮ್ಮಿದ್ದರು. ಆ ಕಾರಣಕ್ಕಾಗಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅದೇ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು. ಈ ಬಾರಿ New Zealand ರಾಷ್ಟ್ರದ Auckland ನಲ್ಲಿ ಜರಗುವ Common Wealth PowerLiftingನಲ್ಲಿ ಮತ್ತೊಮ್ಮೆ ದೇಶವನ್ನು ಪ್ರತಿನಿಧಿಸಲಿದ್ದಾರೆ! ಸಾಮಾನ್ಯ ವರ್ಗದ ಕುಟುಂಬದ ಹಿನ್ನೆಲೆಯ ವಿಶ್ವನಾಥ್ ಅವರ 14 ವರ್ಷಗಳ Powerlifting Journeyಯನ್ನು ಯಾವ ಆಯಾಮದಿಂದ ಕಂಡರೂ ಅದು ರೋಚಕವಾದದ್ದು. ಶಾಲಾ ದಿನಗಳಲ್ಲಿ ಅವರು ಮರದ ದಿಮ್ಮಿಗಳನ್ನು ಎತ್ತಿ ಅದರಿಂದ ಬರುತ್ತಿದ್ದ ಆದಾಯದಿಂದ ತನ್ನ ಶಾಲೆಯ ಖರ್ಚು ವೆಚ್ಚಗಳನ್ನು ಭರಿಸುತ್ತಿದ್ದರಂತೆ. ಈ ವೃತ್ತಿ ಅವರನ್ನು Powerlifter ಆಗುವಲ್ಲಿ ಪ್ರೇರೇಪಿಸಿ ಸದ್ಯ 30 ರ ಹರೆಯದ ಕುಂದಾಪುರ ಮೂಲದ ಸ್ಪುರದ್ರೂಪಿ, ಕಟ್ಟು ಮಸ್ತು ದೇಹದ ಗಾಣಿಗ – ಕ್ರೀಡಾ ಲೋಕದ ಸ್ಫೂರ್ತಿ, ಕನ್ನಡ ನಾಡಿನ ಆಸ್ತಿ. ಅವರು ಈವರೆಗೆ ಸಂಪಾದಿಸಿರುವ ಪದಕಗಳ ಪಟ್ಟಿಯನ್ನು ಒಮ್ಮೆ ಗಮನಿಸಿದರೆ ನೀವು ನಿಬ್ಬೆರಗಾಗುವುದು ಖಂಡಿತ!
ಸಾಧಕರ ಜೊತೆ ಸಂವಾದ ನಡೆಸುವ ನನ್ನ ‘ ಕೂತು ಮಾತಾಡುವ’ ಕಾರ್ಯಕ್ರಮಕ್ಕೆ ಅವರನ್ನು 2019ರಲ್ಲಿ ಆಹ್ವಾನಿಸಿದ ನಂತ್ರ ನನ್ನ, ಅವರ ಪರಿಚಯ ಸ್ನೇಹಕ್ಕೆ ತಿರುಗಿತು. ಸಾಕಷ್ಟು ವಿಷಯಗಳನ್ನು ಆಗಾಗ ಚರ್ಚಿಸುತ್ತಿದ್ದೆವು. ತನ್ನ ಉದ್ಯೋಗ ತೊರೆದು GYM ತೆರೆಯುವ ಸಂದರ್ಭ ಅದರ ಸಾಧಕ ಬಾಧಕ, ಆಳ ಅಗಲವನ್ನು ಗಹನವಾಗೇ ಚರ್ಚಿಸಿದ್ದೆವು.

ನಾ ಕಂಡಂತೆ ವಿಶ್ವನಾಥ್ ಒಬ್ಬ ಒಳ್ಳೆಯ ಮಾತುಗಾರ. ಅವರ ಭಾಷಾ ಪ್ರೌಢಿಮೆ, ವಿಷಯಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ರೀತಿ ವಿಶೇಷವಾದದ್ದು. 2020ರಲ್ಲಿ ರಾಜ್ಯದ ಪ್ರತಿಷ್ಠಿತ ಪತ್ರಿಕೆಯೊಂದು ‘ಯುವ ಸಾಧಕ 2020’ ಶೀರ್ಷಿಕೆಯಲ್ಲಿ ಮೊದಲ ಬಾರಿಗೆ ಕೊಡ ಮಾಡಿದ ಸಾಧಕರ ಪಟ್ಟಿಯಲ್ಲಿ ಅವರ ಜೊತೆ ನಾನೂ ಪ್ರಶಸ್ತಿ ಸ್ವೀಕರಿಸಿದ್ದು ನನ್ನ ಪಾಲಿಗೆ ಅವಿಸ್ಮರಣೀಯ!

Commonwealth PowerLifting 2022 – Auckland, New Zealand.
ಸಾಧನೆಯ ಪಥದಲ್ಲಿ ತನ್ನ ಸತತ ಪ್ರಯತ್ನ, ನಿರಂತರತೆ, ಕಠಿಣ ಪರಿಶ್ರಮದ ಮೂಲಕವೇ ಈ ಹಂತ ತಲುಪಿದವರು. ‘ಈತನಲ್ಲಿ ಹುಮ್ಮಸ್ಸಿದೆ. ಏನೋ ಸಾಧಿಸಬಲ್ಲ’ ಎಂದು ಗುರುತಿಸಿ ಮೊದಲ ಹೆಜ್ಜೆಯನ್ನಿಡಲು ಪ್ರಶಾಂತ, ಧನಂಜಯ ಕುಂದಾಪುರ, ವಿಜಯ್ ಭಂಡಾರಿ, ಪ್ರಕಾಶ್ ಮೊಗವೀರ ಮತ್ತು ಸಂದೀಪ ಎನ್ನುವವರು ಸಹಕಾರ ನೀಡಿದರು. ಈ ಪೈಕಿ ಪ್ರಶಾಂತ್ ತರಬೇತುದಾರರಾಗಿ ಧನಂಜಯ ಅವರು ಮಾರ್ಗದರ್ಶಕರಾಗಿದ್ದರು.
ಪ್ರತಿನಿತ್ಯ Vishwanathರ Instagram ಗಮನಿಸಿದರೆ ವ್ಯಾಯಾಮದ ಒಂದಿಲ್ಲೊಂದು ಹೊಸತನದ ವಿಡಿಯೋ ನಿಮಗೆ ಕಾಣಸಿಗುತ್ತದೆ.
ನಾಡಿದ್ದು Aucklandನಲ್ಲಿ 93 ಕೆಜಿ Open Senior ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಇವರ ಜೊತೆ 15 ರಾಷ್ಟ್ರಗಳ ಘಟಾನುಘಟಿ ಕ್ರೀಡಾಳುಗಳು ಸ್ಪರ್ಧಿಸಲಿದ್ದಾರೆ.
Open Senior ವಿಭಾಗ ಅಂದ್ರೇನು?
Junior, Sub Junior, Master ವಿಭಾಗಗಳಲ್ಲಿ ವಯಸ್ಸಿನ ಮಿತಿ ಇರುತ್ತದೆ. ಆದರಿಲ್ಲಿ, ತಾವು ಶಕ್ತಿಶಾಲಿ ಎಂದುಕೊಂಡ ಯಾರೇ ಬಯಸಿದರೂ ಸ್ಪರ್ಧಿಸಬಹುದು.ವಿಶ್ವನಾಥ್ ದೇಹ ತೂಕ 93 ಕೆಜಿ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ 2019ರಲ್ಲಿ ಇದೇ ವಿಭಾಗದಲ್ಲಿ 327.5 ಕೆಜಿ ಭಾರ ಎತ್ತಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಅದಕ್ಕೂ ಹೆಚ್ಚು ತೂಕವನ್ನು ಯಶಸ್ವಿಯಾಗಿ ನಿಭಾಯಿಸುವ ಸಂಪೂರ್ಣ ಭರವಸೆ ಅವರಿಗಿದೆ. ಈ ಸ್ಪರ್ಧಾಕೂಟ Nov 27 ರಿಂದ Dec 4ರವರೆಗೆ ಜರಗಲಿದೆ.Dec 1 ಮತ್ತು 3 ನೇ ತಾರೀಕಿನಂದು ವಿಶ್ವನಾಥ್ ರ ಸ್ಪರ್ಧೆ ನಿಕ್ಕಿಯಾಗಿದೆ. ಇಲ್ಲಿ ಕೇವಲ ಒಂದೇ ದಿನದ ಅಂತರವಿರುವುದು ಒಂದು ಸವಾಲಾಗಿದೆ. ‘ಕಳೆದ ಬಾರಿಯೂ ಹೀಗೆಯೇ ಆಗಿ ನನಗೆ Forearm ನೋವಾಗಿತ್ತು. ಆದರೆ ಹಿಂದಿನ ಅನುಭವ ನನಗೆ ಪಾಠ ಕಲಿಸಿದೆ. ಇದನ್ನು ಹೇಗಾದರೂ ನಿಭಾಯಿಸುತ್ತೇನೆ’ ಎನ್ನುವ ನಂಬಿಕೆ ಅವರಿಗಿದೆ. ‘ಸ್ಪರ್ಧೆಯಲ್ಲಿ ನನ್ನ ಎದುರಾಳಿಯೊಬ್ಬರು ಪಾಕಿಸ್ತಾನ ದೇಶದವರಾದ ಕಾರಣ ಭಾಗವಹಿಸಲು ತುಸು ಹೆಚ್ಚೇ ಉತ್ಸುಕನಾಗಿದ್ದೇನೆ’ ಎಂದಿದ್ದಾರೆ.
‘ಇಲ್ಲಿ ನಾನು ಗೆದ್ದರೆ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ನನಗೆ ತಿಳಿದಿಲ್ಲ. ಆದರೆ ನನ್ನ ದೇಶವನ್ನು ಪ್ರತಿನಿಧಿಸುವುದು ನನ್ನ ಪಾಲಿಗೆ ಸಂದ ಯೋಗ. ಆ ದಿನಗಳಲ್ಲಿ Army ಸೇರಬೇಕೆಂದಿದ್ದೆ. ಮಾಹಿತಿ ಕೊರತೆ ಕಾರಣ ಸಾಧ್ಯವಾಗಲಿಲ್ಲ. ಆದರೀಗ ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ ತೃಪ್ತಿ ನನಗಿದೆ. ಈ ಸ್ಪರ್ಧೆಯಲ್ಲಿ ಇನ್ನೊಂದು ದಾಖಲೆ ನಿರ್ಮಿಸಬೇಕೆನ್ನುವ ಹಂಬಲ ನನ್ನದು. ನಿಮಗೆ ಗೊತ್ತಿದೆ, ನಾನು ಎಲ್ಲಾ ತಯಾರಿ ಅದಕ್ಕಾಗಿ ಮಾಡಿಕೊಂಡಿದ್ದೇನೆ. ನಾಡಿದ್ದು ಅಲ್ಲಿನ ಹವಾಮಾನ, ಅರೋಗ್ಯ ನನ್ನ ಪರವಾಗಿದ್ದರೆ ನಾನು ಗೆದ್ದಂತೆ!’ ಎಂದು ತುಂಬು ಆತ್ಮವಿಶ್ವಾಸದಿಂದ ಹೇಳಿಕೊಂಡರು.
2018 Accident
ತನ್ನ ಸಾಧನೆಯ ಒಂದೊಂದೇ ಮೆಟ್ಟಿಲೇರುತ್ತಿದ್ದ ವಿಶ್ವನಾಥ್ಗೆ 2018ರಲ್ಲಿ ನಡೆದ ಅಪಘಾತವು ಬರಸಿಡಿಲಿನಂತೆ ಬಡಿಯಿತು. ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡು ಆರು ದಿನಗಳ ಕಾಲ ಕೋಮಾದಲ್ಲಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡರು. ಆನಂತರ ವೈದ್ಯರು ಮೂರು ಕೆಜಿ ಭಾರವನ್ನು ಸಹ ಎತ್ತಬಾರದು ಎಂದು ಸಲಹೆ ನೀಡಿದ್ದರು. ಆದರೆ ಆ ಮಾತನ್ನು ಲೆಕ್ಕಿಸದೆ ವಿಶ್ವನಾಥ್ ಬರೋಬ್ಬರಿ 327 ಕೆಜಿ ತೂಕ ಎತ್ತುವ ಮೂಲಕ ತನ್ನ ಅಮೋಘ ಸಾಮರ್ಥ್ಯ ಪ್ರದರ್ಶಿಸಿದರು !
Medals List!
ವಿಶ್ವನಾಥ್ ರನ್ನು ರಾಜ್ಯಮಟ್ಟದ ಮಾಧ್ಯಮಗಳು ‘ ಕರ್ನಾಟಕದ ಬಾಹುಬಲಿ’ ಎಂದು ಹೆಮ್ಮೆಯಿಂದ ಉಲ್ಲೇಖಿಸಿವೆ.’ ಪ್ರಯತ್ನ ಪಟ್ಟರೆ ಪದಕವನ್ನು ಯಾರೂ ಗೆಲ್ಲಬಹುದು ಆದರೆ ದಾಖಲೆ ನಿರ್ಮಿಸಿ ಹಿಂದಿನ ಸ್ಪರ್ಧೆಗಿಂತ ಈ ಬಾರಿ ನಾನು ಚೆನ್ನಾಗಿ ಪ್ರದರ್ಶನ ನೀಡಬೇಕು ಎನ್ನುವುದಷ್ಟೆ ನನ್ನ ಗುರಿ’ ಎಂದು ವಿನಮ್ರವಾಗಿ ಹೇಳಿಕೊಳ್ಳುವ ವಿಶ್ವನಾಥ್ ಗೆ ನಮ್ಮೆಲ್ಲರ ಹಾರೈಕೆಯಿರಲಿ. ಈ ಬಾರಿ ಅವರಿಂದ ಚಿನ್ನವೇ ನಮ್ಮದಾಗಲಿ ಎನ್ನುವ ಶುಭಾಶಯಗಳೊಂದಿಗೆ …
ಹೋಗಿ, ಗೆದ್ದು ಬನ್ನಿ ವಿಶ್ವನಾಥ್ !
India wishes you ALL THE BEST!
ತುಂಬಾ ಹೆಮ್ಮೆಯ ವಿಚಾರ. ಶುಭವಾಗಲಿ 💐. ನೀವು ಈ ಸಂದರ್ಭದಲ್ಲಿ ಒಳ್ಳೆಯ ಲೇಖನ ಬರೆದಿದ್ದೀರಿ. ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಾಳುಗಳಿಗೆ ಇಂಥಹ ಲೇಖನವೇ ಸ್ಪೂರ್ತಿ. ನಿಮ್ಮಂತಹ ಸಾಂದರ್ಭಿಕ ಲೇಖಕರು ಇರುವ ತನಕ ಉಡುಪಿ ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಾಳುಗಳಿಗೆ ಜೀವಕಳೆಗೆ ಬರಗಾಲವಿಲ್ಲ. ನಿಮ್ಮಿಂದ ಇನ್ನಷ್ಟು ಒಳ್ಳೆಯ ಲೇಖನಗಳು ಹೊರಹೊಮ್ಮಲು ನನ್ನ ಶುಭ ಹಾರೈಕೆಗಳು 💐. ನಿಮ್ಮ “ಕೂತು ಮಾತಾಡುವ” ಕಾರ್ಯಕ್ರಮದಲ್ಲಿ ಇಂಥಹ ಬಹಳಷ್ಟು ಸಾಧಕರನ್ನು ಸಮಾಜಕ್ಕೆ ಪರಿಚಯಿಸಿದ ಹೆಗ್ಗಳಿಕೆ ನಿಮ್ಮದಾಗಿದೆ. ಆನೇಕ ಸಾಧಕರನ್ನು ಗುತಿಸಿಕೊಳ್ಳುತ್ತಾ ನೀವು ಸಾಧನೆಯ ಉತ್ತುಂಗ ತಲುಪಿದ್ದೀರಿ. ಒಂದು ವಿಶೇಷ ಸಂಗತಿ ಎಂದರೆ ನಿಮ್ಮ ಒಳ್ಳೆಯ ಸಂಕಲ್ಪದಿಂದ ಹಾಗೂ ಹಾರೈಕೆಯ ಪ್ರತೀಕವೇ ಅವರೆಲ್ಲಾ ಇಂದು ಇನ್ನೂ ಉತ್ತಮ ಸಾಧನೆಯ ಪಥದಲ್ಲಿ ಮಿನುಗುತಿದ್ದಾರೆ. ಅವರೆಲ್ಲರಿಗೂ ನೀವು “ಬೋಣಿ” ಅಂತವೇ ಹೇಳಬಹುದು.