Home Thoughts Don’t Trust Girls – Read This!

Don’t Trust Girls – Read This!

0

Internet ನಮ್ಮ ನಡುವಿದ್ದು ಬೆಳೆಯಲು ಆರಂಭವಾದ ನಂತರ Motivational Speech ಮಾಡುವುದು  ಒಂದು ಉದ್ಯೋಗವಾಗಿ ಬಿಟ್ಟಿತು. ಜ್ಞಾನ, ಮಾತುಗಳನ್ನು ಭಂಡಾರವಾಗಿಟ್ಟುಕೊಂಡು ಲಕ್ಷ ಲಕ್ಷ ಸಂಪಾದಿಸುವ ಹೊಸ ದಾರಿಯನ್ನು ಹಲವರು ಕಂಡುಕೊಂಡರು. ಅವರ ಮಾತುಗಳ ಮಧ್ಯೆ ಬರುವ ಕೆಲವು Onelinerಗಳು, ಉದಾಹರಣೆಗಳು, ಚಿಕ್ಕದು ಆದರೆ ಅತ್ಯಂತ ಪರಿಣಾಮಕಾರಿ ಎನಿಸುವ ಕತೆಗಳು Reels ರೂಪದಲ್ಲಿ, Whatsapp Statusನಲ್ಲಿ ರಾರಾಜಿಸಿ ಅದನ್ನು ‘ can you please share this with me? ‘ ಎಂದು ಕೇಳುವಶ್ಟರ ಮಟ್ಟಿಗೆ ಜನಪ್ರಿಯವಾಗಿ ಇಂದು ನಮ್ಮ ನಡುವೆ ಹಲವು ಪರಿಣಾಮಕಾರಿ ಭಾಷಣ ಮಾಡುವವರಿಗೆ  ಬಲು ಬೇಡಿಕೆ ಇದೆ.

ಇಂತಹ ವಿಡಿಯೋಗಳನ್ನು  ಡ್ರೈವಿಂಗ್ ಮಾಡುವಾಗ ಕೇಳುತ್ತೇನೆ. ಸಮಯ ಕಳೆದದ್ದು  ಗೊತ್ತಾಗದೆ ಒಂದಿಷ್ಟು ಒಳ್ಳೆ ವಿಚಾರ ತಿಳಿದುಕೊಂಡ ಸಂತೃಪ್ತಿ ನನಗೆ ಅದೆಷ್ಟೋ ಬಾರಿ ಸಿಕ್ಕಿದೆ. ಆದರೆ ಯಾರ ಮಾತುಗಳನ್ನು ಕೇಳುತ್ತೇವೆ ಅನ್ನೋ ಆಯ್ಕೆ ಇಲ್ಲಿ ಮುಖ್ಯ.

‘Motivational Videoಗಳಲ್ಲಿ ಕೇಳುವ ಮಾತುಗಳ ವಾಯ್ದೆ ಕೇವಲ 2 ದಿನಗಳದ್ದಾಗಿರುತ್ತದೆ ಮರ್ರೆ’ಎಂದು ಹಲವರು ಹೇಳುತ್ತಾರೆ. ಅದು ನಿಜವೂ ಕೂಡ. ಹುಚ್ಚು ಕೋಡಿ ಮನಸಿಗೆ ಪಾಸಿಟಿವ್ ಸಂಗತಿಗಳನ್ನು ಆಗಾಗ ಅಂದ್ರೆ ಪ್ರತಿ ದಿನ ತುಂಬುತ್ತಲೇ ಇರಬೇಕು. ಕ್ರಮೇಣ ಅದು ಒಂದು ಅಭ್ಯಾಸವಾಗಿ ಬದಲಾಗಿ ಕೊನೆಗೊಂದು ದಿನ  ನಮ್ಮ Subconsious Mindನೊಳಗೆ ಹೊಕ್ಕಿದಾಗ Positive Mindset ಬದುಕಿನ ರೀತಿಯಾಗಬಹುದು.

Brahmakumari Sister Shivani, Mahatriara, Jayant Kaykiniಯವರ ಮಾತುಗಳನ್ನು ಹೆಚ್ಚಾಗಿ ಕೇಳುತ್ತೇನೆ. ಅಷ್ಟಕ್ಕೂ ಇಂತಹ ಹೆಸರುವಾಸಿ ವ್ಯಕ್ತಿಗಳಿಂದಲೇ ನಾವು ಸ್ಫೂರ್ತಿ ಪಡೆಯಬೇಕೆಂದಿಲ್ಲ. ಬಸ್ಸಿನ ಅಥವಾ ಆಟೋ ಹಿಂದೆ ಬರೆದ ಒಂದು ಸಾಲು ನಿಮ್ಮ ಬದುಕು ಬದಲಿಸಬಹುದು. Facebookನಲ್ಲಿ ಯಾರೋ ಬರೆದ ಒಂದು ಸಾಲು, Twitterನಲ್ಲಿ ಕಂಡ ಒಂದು ಟ್ವೀಟ್ ನಮ್ಮೊಳಗಿನ ಅದಮ್ಯ ಚೈತನ್ಯವನ್ನು ಜಾಗೃತಗೊಳಿಸಬಹುದು. ಪ್ರತಿನಿತ್ಯ ಓಡಾಡುವಾಗ ಜಾಹೀರಾತುಗಳ ಶೀರ್ಷಿಕೆ, ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ, Hoardingsಗಳನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಎಲ್ಲದರಿಂದಲೂ ಒಂದು ಹಿಡಿ ಸ್ಫೂರ್ತಿ ಪಡೆಯಬಹುದು . ನಾನಂತು ಇಂತಹ ವಿಚಾರಗಳಿಂದ ಹೆಚ್ಚಾಗಿ ಹೊಸತೇನೋ ಒಂದನ್ನು ಕಲಿಯುತ್ತಲೇ ಇದ್ದೇನೆ.

ಅವಕಾಶ ಸಿಕ್ಕಾಗೆಲ್ಲ ಬಸ್ಸು, ಬೈಕು, ಕಾರಿನಲ್ಲಿ ಓಡಾಡುವಾಗ ಇದೆಲ್ಲವನ್ನು ಗಮನಿಸುತ್ತಲೇ ಇರಿ. ನಿಮ್ಮೊಳಗಾಗುವ ಬದಲಾವಣೆಯನ್ನು ನೀವೇ ನೋಡಿ.

ಕಳೆದ 15 ವರ್ಷಗಳಿಂದ TV, Radio ಕಾರ್ಯಕ್ರಮಗಳಿಗೆ, ಜಾಹೀರಾತುಗಳಿಗೆ ಸಾಮಾಜಿಕ ಜಾಲತಾಣದಲ್ಲಿ ನಾನು ಪ್ರಸ್ತುತಪಡಿಸುವ ವಿಡಿಯೋಗಳಿಗೆ ಈ ಎಲ್ಲಾ ಸಂಗತಿಗಳು ನನ್ನ ಮೇಲೆ ವಿಶೇಷ ಪ್ರಭಾವ ಬೀರಿವೆ .

2012 ರಲ್ಲಿ ಆಟೋವೊಂದರ ಹಿಂದೆ ನೋಡಿದ ಹೆಸರು ‘ ಸಿಹಿ’ ನಂತ್ರ 2014 ರಲ್ಲಿ ನಮ್ಮ ಮನೆಯ ಹೆಸರಾಗಿ ಬಿಟ್ಟಿತು. ಬೆಂಗಳೂರಿನ ನನ್ನ ಗೆಳೆಯನೊಬ್ಬನ ಮನೆ ಹೆಸರು ‘ ನೆಮ್ಮದಿ’. ಇದನ್ನು ನಾನು ಬಿಎಂಟಿಸಿ ಬಸ್ಸಿನಲ್ಲಿ ನೋಡಿದ್ದೆ. ಇದೇ ಹೆಸರಿಡು ಎಂದು ಆತನಿಗೆ ಸೂಚಿಸಿದ್ದೆ. ಸ್ವಲ್ಪ ಆತ್ಮೀಯನೇ ಆದ ಕಾರಣ ಒಪ್ಪಿದ. ನನ್ನ Whatsappನ aboutನಲ್ಲಿ ಕಾಣುವ ಹೆಚ್ಚಿನೆಲ್ಲಾ ಸಾಲುಗಳು ಅಲ್ಲೋ ಇಲ್ಲೋ ನೋಡಿ ಖುಷಿ ಪಟ್ಟು ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದೇ ಆಗಿದೆ… ಕೆಲವು ಹೀಗಿವೆ :

# When you go silent you realize a lot

# Confuse them with your silence shock them with your actions

# All progress takes place outside the comfort zone

# People say a lot so I watch what they do

# You have got dreams to chase and not people to impress

# ಉಳಿದಿರೋ ಬದುಕು ಗೆಲ್ಲಲು ಬದುಕು

ಕೆಲವೊಮ್ಮೆ ಒಬ್ಬರ ಒಂದು ಮಾತು ನಮ್ಮ ಬದುಕೇ ಬದಲಾಗುವಷ್ಟರ ಮಟ್ಟಿಗೆ  ಗಾಢವಾದ ಪ್ರಭಾವ ಬೀರಬಹುದು. ಒಂದೆರಡು ಇಲ್ಲಿ ಉಲ್ಲೇಖಿಸುತ್ತಿದ್ದೇನೆ, ಕೇಳಿ :

2011 – ನಾನು ಮಂಗಳೂರಿನ 92.7 Bigfm Radio Station ನಲ್ಲಿ Radio Jockey/ Associate Producerಆಗಿ  ಕಾರ್ಯನಿರ್ವಹಿಸುತ್ತಿದ್ದ ದಿನಗಳಲ್ಲಿ ಜನವರಿ ತಿಂಗಳ ಮಕರ ಸಂಕ್ರಾಂತಿಗೆ Jayant Kaikini ಸರ್ ಜೊತೆ 1 ಗಂಟೆ  ಸಂದರ್ಶನ ಮುಗಿಸಿದ ನಂತ್ರ ನನಗವರು ಹೇಳಿದ ಒಂದು ಮಾತು ಇಲ್ಲಿಯವರೆಗೆ ಕರೆದುಕೊಂಡು ಬಂದು ನಿಲ್ಲಿಸಿದೆ.

‘ ಏಯ್, ನೀನು ಯಾವುದೋ ಒಂದು ಕೆಲಸ ಮಾಡ್ಲಿಕ್ಕೆ ಹುಟ್ಟಿದವನಲ್ಲ. ತುಂಬಾ ಎಲ್ಲಾ ಮಾಡಬಹುದು’ ಎಂದಿದ್ದರು. ಓದು, ಬರವಣಿಗೆ ನಾನು ಆರಂಭಿಸಿದ್ದೇ ಆ ದಿನದಿಂದ.

ಒಂದೂವರೆ ವರ್ಷ Actor Raj B Shetty ಮತ್ತು ನಾನು ಇದೇ Radiostationನಲ್ಲಿ ಕಾರ್ಯನಿರ್ವಹಿಸಿದ್ದೆವು.  ‘ ತಳ್ಳು ಗಡಿಯಾದರಾಗಲಿ, ಗೂಡಂಗಡಿಯಾದರಾಗಲಿ  ಏನಾದರಾಗಲಿ ಸ್ವಂತದ್ದಾಗಲಿ‘ ಎಂದಿದ್ದರು. ಇದೇ ಮಾತು ನನಗೆ Freelancer ಆಗಬೇಕು ಎನ್ನುವ ಕನಸು ಕಾಣುವಂತೆ ಮಾಡಿ 2017 ರಿಂದ ಸತತ 3 ವರ್ಷಗಳ ಕಾಲ Freelancer ಆಗಿ ಒಂದು ಹಂತಕ್ಕೆ ಯಶಸ್ವಿಯಾಗಿದ್ದೆ. ಇನ್ನೇನು ಇಲ್ಲಿಂದ ನನ್ನ ಬದುಕು Take Off ಆಗುತ್ತದೆ ಎನ್ನುವಷ್ಟರಲ್ಲಿ ಪ್ರಪಂಚವನ್ನು  Covid-19 ಆವರಿಸಿಕೊಂಡು ಬದುಕಿನ ಹೊಸ ಅಧ್ಯಾಯ ತೆರೆದುಬಿಟ್ಟಿತು. ನಷ್ಟ, ಕಷ್ಟ, ಇಷ್ಟ ಕಲಿಸಿದ ಈ ಕೊರೊನವನ್ನು ಜೀವಮಾನದುದ್ದಕ್ಕೂ ನಾವು ಮರೆಯಬಾರದು.

10 ನೇ ತರಗತಿಯಲ್ಲಿದ್ದಾಗ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಒಂದು ತರಗತಿಯಲ್ಲಿ Pundalikaksha Kodancha ಎನ್ನುವ ಬೇರೊಂದು ಶಾಲೆಯ ಆಂಗ್ಲ ಭಾಷೆ ಕಲಿಸುವ ಮೇಷ್ಟ್ರು ಹೇಳಿದ ‘ ನೀವು ಯಾರನ್ನಾದರೂ ಸಂಬೋಧಿಸುವಾಗ ಅವರ ಹೆಸರಿನಿಂದ ಮಾತನಾಡಿಸಬೇಕು. ಆಗ ನಿಮಗೂ ಅವರಿಗೂ ಆಪ್ತತೆ ಬೆಳೆಯುತ್ತದೆ’ ಎಂದಿದ್ದರು. ಈ ಮಾತು ನನ್ನ ಮೇಲೆ ಎಷ್ಟು ಪರಿಣಾಮ ಬೀರಿದೆಯೆಂದರೆ ಈಗ ಹೆಸರು ಕರೆಯದೆ ಮಾತನಾಡುವುದೇ ಇಲ್ಲ ಎನ್ನಬಹುದು. ಅದೀಗ ನನಗೆ ಅಭ್ಯಾಸವಾಗಿಬಿಟ್ಟಿದೆ . ಒಮ್ಮೆ ನೀವೂ ಪ್ರಯತ್ನ ಪಡಿ. ನಂತ್ರ ನಿಮ್ಮಲ್ಲಿನ ಬದಲಾವಣೆ ಗಮನಿಸಿ.

ಇಸವಿ ಸರಿಯಾಗಿ ನೆನಪಿಲ್ಲ. ನನಗೆ ಹಿಡಿಸುವ ಸಂದರ್ಶನಗಳನ್ನು ಪೂರ್ತಿ ನೋಡುತ್ತೇನೆ. ಅರ್ಧಕ್ಕೆ ನಿಲ್ಲಿಸುವ ಕ್ರಮವೇ ಇಲ್ಲ. ಸುವರ್ಣ ವಾಹಿನಿಯಲ್ಲಿ ನಿರೂಪಕಿ ಸುಗುಣ ಒಮ್ಮೆ Real Star Upendra ಅವರ ಸಂದರ್ಶನ ನಡೆಸುತ್ತಿದ್ದರು. ಹೇಳಿ ಕೇಳಿ ಉಪೇಂದ್ರ ಅವರ ಆಲೋಚನೆ, ಮಾತುಗಳು ನನಗೆ ಹೊಸ ಪ್ರಪಂಚವನ್ನೇ ಪರಿಚಯಿಸುತ್ತದೆ. ಹೀಗಿರುವಾಗ ಮಾತಿನ ಮಧ್ಯೆ ಹೇಳಿದ ಒಂದು ನಿಮಿಷದ ಕತೆ ನಾನು ಇಂದಿನವರೆಗೂ ಚಾಚೂ ತಪ್ಪದೆ ಪಾಲಿಸುವ ಪ್ರಯತ್ನದಲ್ಲಿದ್ದೇನೆ. ಬಹಳಷ್ಟು ಖುಷಿ ಸಂಪಾದಿಸಿದ್ದೇನೆ. ಆಶ್ಚರ್ಯ ಅಂದ್ರೆ ಆ ಮಾತು ಈ ವಿಡಿಯೋ ನೋಡಿ ಸ್ವಲ್ಪ ದಿನಗಳ ನಂತ್ರ ಸ್ನೇಹಿತರೊಬ್ಬರು whatsappಗೆ ಕಳುಹಿಸಿದ್ದರು. ಅವಕಾಶ ಸಿಕ್ಕಾಗಲೆಲ್ಲ ನನ್ನ ವೇದಿಕೆಯ ಕಾರ್ಯಕ್ರಮದ ಕೊನೆಯಲ್ಲಿ ಈ ಮಾತನ್ನು ಹೇಳಿದ್ದೇನೆ. ಇಲ್ಲಿದೆ ನೋಡಿ …

ನಿನ್ನೆ ಸ್ನೇಹಿತರಾದ ಹರಿಪ್ರಸಾದ್ ನೆಲ್ಯಾಡಿ ಒಂದು ವಿಡಿಯೋ ಕಳುಹಿಸಿದ್ದರು. Amitabh Bachan ಹೇಳಿದ ಈ ಮಾತು ಬಹಳ ಹಿಡಿಸಿತು. ಇಲ್ನೋಡಿ…

ಈ ಎಲ್ಲಾ ಮಾತುಗಳು ನಿಮಗೆ ಇಷ್ಟ ಆಗಿದ್ದಿದ್ರೆ ಆ ವಿಚಾರಗಳು ನಿಮ್ಮೊಳಗೇ ಇತ್ತು ಅಂತರ್ಥ. ಅದಕ್ಕಾಗೇ ಅದು ನಿಮಗಿಷ್ಟವಾಗಿರುವುದು ಬಿಟ್ರೆ ಬೇರೆ ಯಾವ ಕಾರಣಕ್ಕೂ ಅಲ್ಲ. ಮತ್ತೆ ಇಂತಹ ಮಾತುಗಳನ್ನು ಆಡಲು, ಹೇಳಲು ನಮಗೆ ಮಹಾನ್ ಮೇಧಾವಿಗಳು, ನೂರಾರು ಕೃತಿ ಓದಿಕೊಂಡವರೇ ಬೇಕಾಗಿಲ್ಲ. ಬದುಕನ್ನು ಅತ್ಯಂತ ಸೂಕ್ಷ್ಮವಾಗಿ ಗ್ರಹಿಸಿ ಅಲ್ಲಿಂದಲೇ ಪಡೆಯಬಹುದಾದ ಸಂಗತಿಗಳಾಗಿವೆ.

ಬಸ್ಸು, ಬೈಕು, ಜಾಹೀರಾತು, ಸಾಮಾಜಿಕ ಮಾಧ್ಯಮಗಳನ್ನು ಗಮನಿಸುತ್ತಲೇ ಇರಿ.ನಿಮ್ಮ ಬದುಕು ಬದಲಾಗಲಿ ..ಈ ಪ್ರಪಂಚದಲ್ಲಿ ಒಳ್ಳೆ ವಿಚಾರಗಳೆಲ್ಲವನ್ನು ಹೇಳಿದ್ದಾಗಿದೆ. ನಾವು ಪಾಲಿಸುವುದಷ್ಟೇ ಬಾಕಿ ಇದೆ. ಹೀಗೆ ಹೇಳಲು ಹೋದರೆ ಸಾವಿರ ಮಾತಿದೆ.

 


 

LEAVE A REPLY

Please enter your comment!
Please enter your name here