Colors Kannada ವಾಹಿನಿಯ ‘ಗೀತಾ’ ಧಾರಾವಾಹಿಯಲ್ಲಿ ಇವರನ್ನು ಕಂಡ ತಕ್ಷಣ ಬೈಗುಳದ ಹೊಳೆಯನ್ನು ಹರಿಸುವವರೇ ಜಾಸ್ತಿ. ಅಷ್ಟರ ಮಟ್ಟಿಗೆ ತನ್ನ ಪಾತ್ರದ ಮೂಲಕ ರಾಜ್ಯದ ಪ್ರೇಕ್ಷಕರ ಮನ ಗೆದ್ದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರ ಗರಡಿಯಲ್ಲಿ ಪಳಗಿದ ತುಳು ರಂಗಭೂಮಿ, ಕಿರುತೆರೆ, ಸಿನಿಮಾ ನಟ ಶೋಭರಾಜ್ ಪಾವೂರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ‘ಪ್ರಾಯಶಃ’ ಸಿನಿಮಾ ಇಂದು ಬಿಡುಗಡೆಯಾಗಿದೆ. ದಶಕಕ್ಕೂ ಮೀರಿದ ನಮ್ಮ ಗೆಳೆತನ, ಅಭಿನಯವನ್ನೇ ಬದುಕಾಗಿಸ ಹೊರಟ ಶೋಭರಾಜ್ ಅಪ್ಪಟ ಪ್ರತಿಭಾವಂತ ಎನ್ನವುದಕ್ಕಿಂತ ಅಪ್ಪಟ ಹೃದಯವಂತ. ಸುಮ್ಮನೆ ಅವರನ್ನು ಹೊಗಳಿ ನನಗೇನೂ ಆಗಬೇಕಾದದ್ದಿಲ್ಲ! ನಮ್ಮ ಚಿತ್ರರಂಗ ಇಂತಹ ಕಲಾವಿದರಿಂದ ಮತ್ತಷ್ಟು ಬೆಳಗಬೇಕಿದೆ. ಅವರೇ ಹೇಳಿಕೊಂಡಂತೆ ಈ ಚಿತ್ರ ಅವರ ಸಿನಿಮಾ ಬದುಕಿಗೆ ಹೊಸ ದಾರಿ ತೋರಿ ‘ಪುರುಸೊತ್ತೇ ಇಲ್ಲ’ ಎನ್ನುವಷ್ಟರಮಟ್ಟಿಗೆ ಅವಕಾಶಗಳು ಒದಗಿ ಬರಲಿ ಎನ್ನುವ ಹಾರೈಕೆಯೊಂದಿಗೆ ಸಿನಿಮಾ ಕುರಿತ ನನ್ನನಿಸಿಕೆಯ ಈ ವಿಡಿಯೋ ನಿಮಗಾಗಿ …